ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯರಿಬ್ಬರಿಗೂ ಒಂದೇ ಆಂಬುಲೆನ್ಸ್ನಲ್ಲಿ ಹೆರಿಗೆ ಆಗಿದೆ.
ಇಂತಹ ಅಪರೂಪದ ಘಟನೆ ಭಾನುವಾರ ಜಿಲ್ಲೆಯಲ್ಲಿ ಸಂಭವಿಸಿದ್ದು, ಶುಶ್ರೂಷಕ ಮತ್ತು ಸಿಬ್ಬಂದಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅಥಣಿ ತಾಲೂಕಿನ ಮಲಾಬಾದ ಗ್ರಾಮದ ರುಕ್ಸಾನ್ ಕಣಬರ್ ಹಾಗೂ ಬಳ್ಳಿಗೇರಿ ಗ್ರಾಮದ ರಾಜಶ್ರೀ ಕುರಬರ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅಥಣಿ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಕರೆತರಲಾಗುತ್ತಿತ್ತು. ಮಾರ್ಗಮಧ್ಯೆ ಅತೀವ ಹೆರಿಗೆ ನೋವಿನಿಂದ ಮಹಿಯರಿಬ್ಬರಿಗೂ ಆಂಬುಲೆನ್ಸ್ನಲ್ಲೇ ಶುಶ್ರೂಷಕ ಮಹೇಂದ್ರ ಕೊಟಗಿ ಹಾಗೂ ಸಿಬ್ಬಂದಿ ಸಂಜೀವ ಕಬ್ಬೂರ ಅವರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.
ರಾಜಶ್ರೀ ಹೆಣ್ಣು ಮಗುವಿಗೆ ಹಾಗೂ ರುಕ್ಸಾನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿವೆ. ಆಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.