ಕಾರ್ಕಳ ರಾಮಸಮುದ್ರದ ದಡದಲ್ಲಿ ಕಾದಂಬರಿ ಬಿಡುಗಡೆ

0

ಉಪನ್ಯಾಸಕ ಪರಮ್ ಭಾರಧ್ವಜ್ ಅವರ ಚೊಚ್ಚಲ ಕೃತಿ ‘ಕರ್ಣ ಕುಂಡಲಧಾರಿಣಿ’ ಕಾದಂಬರಿಯನ್ನು ಲೇಖಕ ರಾಜೇಂದ್ರ ಭಟ್ ಕೆ. ರವಿವಾರ ಕಾರ್ಕಳ ರಾಮಸಮುದ್ರದ ದಡದಲ್ಲಿ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು, ಓದುವ ಮತ್ತು ಬರಹಗಾರರ ಸಂಖ್ಯೆ ಕಡಿಮೆಯಾಗಿಲ್ಲ. ಮಾಧ್ಯಮ ಬದಲಾಗಿದೆಯಷ್ಟೆ. ಸಾಮಾಜಿಕ ಜಾಲತಾಣಗಳು ಅತ್ಯಂತ ವೇಗದಲ್ಲಿ ಸಮಾಜವನ್ನಾವರಿಸಿದೆ. ಜಾಗತಿಕ ವೇದಿಕೆಯಾಗಿರುವ ಆಧುನಿಕ ಮಾಧ್ಯಮಗಳನ್ನು ಸದುಯೋಗಪಡಿಸಿ ಕೊಳ್ಳಬೇಕು ಎಂದರು.

ಕಾರ್ಕಳ ಮಂಜುನಾಥ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್.ವಿವೇಕಾನಂದ ಶೆಣೈ, ಚಲನಚಿತ್ರ ನಿರ್ದೇಶಕ ಸುಧೀರ್ ಶಾನುಭೋಗ್, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಗೋಪೀನಾಥ ಶೆಣೈ, ರಾಘವೇಂದ್ರ ಮಠದ ಕಾರ್ಯಕರ್ತ ರಾಘವೇಂದ್ರ, ಸಾಣೂರು ನರಸಿಂಹ ಕಾಮತ್, ಕಾಂಜರಕಟ್ಟೆ ದೀಪಕ್ ಕಾಮತ್ ಉಪಸ್ಥಿತರಿದ್ದರು. ಲೇಖಕ ಪರಮ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here