25ಎಸ್ಎನ್ಡಿ2 ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರು ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿ ಮುಖಂಡರಾದ ಸುರೇಶ ಅಂಗಡಿ ಹಾಗೂ ಕನ್ನಡದ ಖ್ಯಾತ ಹಾಸ್ಯ ನಟ ರಾಕಲೈಮ್ ಸುಧಾಕರ ಹಾಗೂ ಗಾನ ಕೋಗಿಲೇ ಎಸ್.ಪಿ.ಬಾಲಸುಭ್ರಮಣ್ಯಂ ನಿಧನರಾದ ಹಿನ್ನೆಲೆಯಲ್ಲಿ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ಹಾಗೂ ತಾಲೂಕ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಸಿಂದಗಿ ವತಿಯಿಂದ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಸಿಂದಗಿ : ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರು ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿ ಮುಖಂಡರಾದ ಸುರೇಶ ಅಂಗಡಿ ಹಾಗೂ ಕನ್ನಡದ ಖ್ಯಾತ ಹಾಸ್ಯ ನಟ ರಾಕಲೈಮ್ ಸುಧಾಕರ ಹಾಗೂ ಗಾನ ಕೋಗಿಲೇ ಎಸ್.ಪಿ.ಬಾಲಸುಭ್ರಮಣ್ಯಂ ನಿಧನರಾದ ಹಿನ್ನೆಲೆಯಲ್ಲಿ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ಹಾಗೂ ತಾಲೂಕ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಸಿಂದಗಿ ವತಿಯಿಂದ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು.
ಸಾಹಿತ್ಯ ವೇದಿಕಯ ಅಧ್ಯಕ್ಷ ಮಾಹಾಂತೇಶ ನೂಲಾನವರ ಮಾತನಾಡಿ, ರೈತ ಕುಟುಂಬದಿಂದ ಬಂದ ಅಂಗಡಿ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು, ಭಾಷಾ ಸಾಮರಸ್ಯ ಕಾಪಾಡಿಕೊಳ್ಳವಲ್ಲಿ ಅವರ ಕೊಡುಗೆ ಅಪಾರವಾದದ್ದು, ಮರಾಠ ಮತ್ತು ಕನ್ನಡಿಗರ ನಡುವೆ ಸೌಹಾರ್ದತೆ ಮೂಡಲು ಅಂಗಡಿ ಅವರು ಶ್ರಮಿಸಿದ್ದರು. ಸತತ ನಾಲ್ಕು ಬಾರಿ ಬೆಳಗಾವಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇನ್ನೊರ್ವ ಹಾಸ್ಯ ಕಲಾವಿದ ರಾಕಲೈನ್ ಸುಧಾಕರ ಪೋಷಕ ಪಾತ್ರ ಹಾಗೂ ಹಾಸ್ಯ ಪಾತ್ರಗಳಲ್ಲಿ ನಟಿಸಿ ಯೋಗರಾಜ್ ಭಟ್ಟ ಅವರ ಪಂಚರಂಗಿ ಚಿತ್ರದಲ್ಲಿ ಕುರುಡನ ಪಾತ್ರದಲ್ಲಿ ಜನ ಮನ್ನಣೆಯನ್ನು ಪಡೆದುಕೊಂಡು 100ಕ್ಕೂ ಚಲನ ಚಿತ್ರಗಳಲ್ಲಿ ನಡಿಸಿದ್ದಾರೆ. ಇಡೀ ಚಿತ್ರರಂಗ ವಲಯಕ್ಕೆ ಹಿನ್ನಲೆಯ ಗಾಯಕರಾಗಿ, ಚಿತ್ರಕಲಾ ಸೆವೆಎ ಸಲ್ಲಿಸಿ ಇಡೀ ಜಗತ್ತನ್ನೆ ಗೆದ್ದ ಗಾನಸುಧೆಯನ್ನು ಕಳೆದು ಕೊಂಡ ಕಲಾವಿಧರ ಬಾಳೂ ಬರಡಾದಾಂತಿಗೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಐಕ್ಯತಾ ವೇದಿಕೆಯ ಅಧ್ಯಕ್ಷೆ ಸಬಿಯಾ ಮರ್ತೂರ, ದಾವಲಸಾಬ ಮರ್ತೂರ, ಬಾಗಣ್ಣ ತಮದೊಡ್ಡಿ, ರವಿಚಂದ್ರ ಮಣೂರ, ನಂದಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೇಮ ಜನೈ ಹಾಗೂ ರಾಹುಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಮಹಾಂತೇಶ ನೂಲಾನವರ, ಸಿಂದಗಿ