ಸುಶಾಂತ್ ಸಿಂಗ್ ಆತ್ಮಹತ್ಯೆಯ ಪ್ರಕರಣ ಒಂದೆಡೆ ಸಾಗುತ್ತಿದ್ದರೆ, ಅದರ ಜತೆಗೆ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇಬ್ಬರ ಆತ್ಮಹತ್ಯೆಗೆ ಸಾಮ್ಯತೆ ಇದೆ ಎಂದು ಪೊಲೀಸ್ ಇಲಾಖೆ ಸಾವಿಗೆ ನಿಖರ ಕಾರಣ ಏನಿರಬಹುದೆಂಬ ಹುಡುಕಾಟದಲ್ಲಿದೆ. ಈ ನಡುವೆ ಇದೇ ದಿಶಾ ಪ್ರಕರಣದಲ್ಲಿ ಬಾಲಿವುಡ್ ನಟ ಸೂರಜ್ ಪಾಂಚೋಲಿ ಹೆಸರೂ ತಳುಕು ಹಾಕಿಕೊಂಡ ಹಿನ್ನೆಲೆಯಲ್ಲಿ ಸೂರಜ್ ಸೋಷಿಯಲ್ ಮೀಡಿಯಾ ತ್ಯಜಿಸಲು ಮುಂದಾಗಿದ್ದಾರೆ.
ಹೌದು, ದಿಶಾ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್ ಪಾಂಚೋಲಿ ಹೆಸರು ತಳುಕು ಹಾಕಿಕೊಂಡಿದ್ದೇ ತಡ, ಮುಂಬೈ ಪೊಲೀಸ್ಗೆ ಸೂರಜ್ ದೂರು ನೀಡಿದ್ದಾರೆ. ಸುಖಾಸುಮ್ಮನೆ ಪ್ರಕರಣದಲ್ಲಿ ನನ್ನ ಹೆಸರನ್ನು ಜೋಡಿಸಿ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೆಲ್ಲದರಿಂದ ಬೇಸತ್ತ ಸೂರಜ್ ಇನ್ಸ್ಟಾಗ್ರಾಂನಿಂದ ನಿರ್ಗಮಿಸಿದ್ದಾರೆ.
: ಇನ್ಮುಂದೆ ಹೊಸ ಇನ್ನಿಂಗ್ಸ್ ಆಡ್ತಾರಂತೆ ಸೋನು . ಏನದು?
ಈಗಾಗಲೇ ಇನ್ಸ್ಟಾದಲ್ಲಿರುವ ಒಂದು ಪೋಸ್ಟ್ ಹೊರತುಪಡಿಸಿ ಮಿಕ್ಕ ಎಲ್ಲ ಪೋಸ್ಟ್ ಡಿಲಿಟ್ ಮಾಡಿರುವ ಸೂರಜ್, ‘ಸಿ ಯೂ ಇನ್ಸ್ಟಾಗ್ರಾಂ.. ಮತ್ತೆ ಮುಂದೆ ಒಂದು ದಿನ ಈ ಜಗತ್ತಿನಲ್ಲಿ ಒಳ್ಳೇಯ ಜಾಗ ಸಿಕ್ಕರೆ ಯಾವಾಗಾದರೂ ಸಿಗೋಣ. ಏಕೆಂದರೆ ನಾನೂ ಉಸಿರಾಡಬೇಕಿದೆ’ ಎಂಬ ಪೋಸ್ಟ್ ಹಾಕಿ ಸೋಷಿಯಲ್ ಮೀಡಿಯಾದಿಂದ ದೂರ ಸರಿದಿದ್ದಾರೆ.