ಮಹಾರಾಷ್ಟ್ರದ ಪಾಲ್ಗರ್ನಲ್ಲಿ ಏಪ್ರಿಲ್ನಲ್ಲಿ ಇಬ್ಬರು ಸಾಧುಗಳು ಹಾಗೂ ಅವರ ಕಾರಿನ ಚಾಲಕನನ್ನು ಅಲ್ಲಿನ ಜನರು ಗುಂಪಾಗಿ ಹೊಡೆದು ಹತ್ಯೆ ಮಾಡಿದ್ದರು.
ಏಪ್ರಿಲ್ 16ರಂದು ರಾತ್ರಿ ಕಲ್ಪವೃಕ್ಷಗಿರಿ ಮಹಾರಾಜ್ (70), ಸುಶೀಲ್ಗಿರಿ ಮಹಾರಾಜ್ (30) ಎಂಬ ಸಾಧುಗಳು ಕಾರಿನಲ್ಲಿ ಮುಂಬೈನಿಂದ ಸೂರತ್ಗೆ ತೆರಳುತ್ತಿದ್ದರು. ನಿಲೇಶ್ ತೆಲ್ಗಡೆ ಕಾರಿನ ಚಾಲಕರಾಗಿದ್ದರು. ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದ ಅವರನ್ನು ಮಕ್ಕಳ ಕಳ್ಳರೆಂದು ಆರೋಪಿಸಿ ಮಹಾರಾಷ್ಟ್ರದ ಪಾಲ್ಗರ್ ಬಳಿ ಅಲ್ಲಿನ ಸುಮಾರು 500 ಮಂದಿ ಸೇರಿ ಹೊಡೆದು, ಕೊಂದಿದ್ದರು. ಘಟನೆಗೆ ಸಂಬಂಧಪಟ್ಟಂತೆ 200ಕ್ಕೂ ಅಧಿಕ ಜನರನ್ನು ಬಂಧಿಸಲಾಗಿತ್ತು. ಕೋರ್ಟ್ನಲ್ಲಿ ವಿಚಾರಣೆಯೂ ನಡೆಯುತ್ತಿದೆ.
ಇದೀಗ ಈ ಸಾಧುಗಳ ಹತ್ಯೆಯ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮೃತ ಸುಶೀಲ್ಗಿರಿ ಮಹಾರಾಜ್ ಅವರ ತಾಯಿ ಆಗ್ರಹಿಸಿದ್ದಾರೆ.
ಸುಮಾರು ಐದು ತಿಂಗಳು ಕಳೆದರೂ ಪ್ರಕರಣದ ತನಿಖೆ ಚುರುಕುಗೊಂಡಿಲ್ಲ. ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನು ಸಿಬಿಐಗೆ ವಹಿಸಿದ ಹಾಗೇ, ಸಾಧುಗಳ ಹತ್ಯೆಯ ಕೇಸ್ನ್ನು ಕೂಡ ವಹಿಸಿ. ನಮಗೆ ಮಹಾರಾಷ್ಟ್ರ ಪೊಲೀಸರ ಮೇಲೆ ನಂಬಿಕೆಯೇ ಉಳಿದಿಲ್ಲ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಪಾಲ್ಗಾರ್ನ 18 ಪೊಲೀಸ್ ಸಿಬ್ಬಂದಿಯನ್ನು ದಂಡನೆಗೆ ಗುರಿ ಮಾಡಿದೆ. ಓರ್ವ ಅಧಿಕಾರಿಯನ್ನು ವಜಾ ಮಾಡಿದೆ. (ಏಜೆನ್ಸೀಸ್)