ಬಸವ ಪಂಚಮಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಬಡ ಮಕ್ಕಳಿಗೆ ಹಾಲು ವಿತರಿಸಿದ
:ವೆಂಕಟೇಶ್
ಅರಸೀಕೆರೆ: ಮಾನವ ಬಂಧುತ್ವ ವೇದಿಕೆ ವತಿಯಿಂದ ಇಂದು ಅರಸೀಕೆರೆಯಲ್ಲಿ ಬಸವ ಪಂಚಮಿ ಯ ಹಬ್ಬವನ್ನು ನೂರಾರು ಬಡ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡುತ್ತ ಈ ಕಲಿಯುಗದಲ್ಲಿ ಕಂದಾಚಾರ ಹಾಗೂ ಮೌಢ್ಯತೆಯನ್ನು ದೂರ ವಿಟ್ಟು ಹುತ್ತಕ್ಕೆ ಹಾಲೆರೆದು ವ್ಯರ್ಥ ಮಾಡುವ ಬದಲಾಗಿ ಅಪೌಷ್ಟಿಕತೆ ಇರುವ ಬಡ ಮಕ್ಕಳು ಹಾಲು ಕುಡಿದರೆ ಆರೋಗ್ಯವಂತರಾಗುತ್ತಾರೆ ಆದ್ದರಿಂದ ನಾವೆಲ್ಲರೂ ಮೌಢ್ಯತೆಯನ್ನ ತೋಲಗಿಸೋಣ ಎಂದು ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ವೆಂಕಟೇಶ್ ಅಭಿಪ್ರಾಯ ಪಟ್ಟರು ಈ ಸಮಯದಲ್ಲಿ ನೂರಾರು ಬಡ ಮಕ್ಕಳಿಗೆ ಹಾಲು ವಿತರಿಸಿದರು ಈ ಸಮಯದಲ್ಲಿ ಮುಖಂಡರಾದ ನಗರಸಭೆಯ ಸದಸ್ಯರಾದ ವೆಂಕಟ ಮುನಿ ಕೆಂಕೆರೆ ಸತೀಶ್ ಗೊಲ್ಲರಹಳ್ಳಿ ಪ್ರದೀಪ್ ಆನಂದ್ ಬಾಲರಾಜ್ ಮಂಜಣ್ಣ ರಘು ಕಲ್ಲನಾಯಕನಹಳ್ಳಿ ಮದನ್ ರಾಜು ಇನ್ನೂ ಮುಂತಾದವರು ಹಾಜರಿದ್ದರು
ವರದಿ ಷಡಕ್ಷರಿ ನರಸೀಪುರ