ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರ ಭೂಮಿ ಪೂಜೆಗೆ ಮುಹೂರ್ತವನ್ನು ಇಟ್ಟ ಬೆಳಗಾವಿಯ ಪಂಡಿತ್ ಎನ್.ಆರ್.ವಿಜಯೇಂದ್ರ ಶರ್ಮ ಅವರಿಗೆ ಆಪತ್ತು ಎದುರಾಗಿದೆ.
ವಿಜಯೇಂದ್ರ ಶರ್ಮ ಅವರಿಗೆ ಬೆದರಿಕೆ ಕರೆ ಬಂದಿದ್ದು, ಸದ್ಯ ಅವರ ಮನೆಗೆ ಈಗ ಭದ್ರತೆಗಾಗಿ ಓರ್ವ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ಪಂಡಿತ್ ಶರ್ಮಾ ಅವರು ಬೆಳಗಾವಿಯ ನಿವಾಸಿ. ರಾಮ ಮಂದಿರ ಭೂಮಿ ಪೂಜೆಗೆ ಬೇರೆ ಮುಹೂರ್ತವನ್ನು ಇಡಿ. ಇಲ್ಲದಿದ್ದರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಹಲವು ಫೋನ್ ಕರೆಗಳು ಬರುತ್ತಿವೆ ಎಂದು ಶರ್ಮಾ ತಿಳಿಸಿದ್ದಾರೆ.
ನೀವ್ಯಾಕೆ ಆಗಸ್ಟ್ 5ರಂದೇ ಭೂಮಿಪೂಜೆಗೆ ಮುಹೂರ್ತವನ್ನು ಇಟ್ಟಿದ್ದೀರಿ. ಈ ಸಮಾರಂಭದಲ್ಲಿ ನೀವ್ಯಾಕೆ ಪಾಲ್ಗೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಯಾರೂ ತಮ್ಮ ಹೆಸರನ್ನು ಹೇಳುತ್ತಿಲ್ಲ. ಬೈಯುತ್ತಾರೆ, ಕಠಿಣವಾಗಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ಬೆಳಗಾವಿಯ ತಿಲಕ್ವಾದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಕೊಲೆ ಬೆದರಿಕೆಯಂತಹ ಫೋನ್ ಕರೆಗಳು ಬಂದಿಲ್ಲ ಎಂದೂ ತಿಳಿಸಿದ್ದಾರೆ.
ಪಂಡಿತ್ ಶರ್ಮಾ ಅವರು ಮೊದಲು ಏಪ್ರಿಲ್ನಲ್ಲಿ ಅಕ್ಷಯ ತೃತೀಯಕ್ಕೆ ಸರಿಯಾಗಿ ಮುಹೂರ್ತ ಇಟ್ಟಿದ್ದರು. ಆದರೆ ನಂತರ ಲಾಕ್ಡೌನ್ ಹೇರಲ್ಪಟ್ಟಿದ್ದರಿಂದ ಮುಹೂರ್ತವನ್ನು ಬದಲಾವಣೆ ಮಾಡಿ, ಆಗಸ್ಟ್ 5ಕ್ಕೆ ಇಟ್ಟಿದ್ದಾರೆ.
ಮಾಹಿತಿ – ಏಜನ್ಸಿಸ್