ದಿನಾಂಕ 02-10-2020 ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 151 ವರ್ಷಾಚರಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ವತಿಯಿಂದ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಸ್ವಚತೆ ಕಾರ್ಯಕ್ರಮ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಸಂಕೋನಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚತೆ ಕಾರ್ಯಕ್ರಮ ಮತ್ತು ದೇವಸ್ಥಾನದ ಆವರಣದಲ್ಲಿ ಸಸಿ ನೆರವೇರಿಸಲಾಯಿತು ಮತ್ತು ಸ್ಥಳೀಯ ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಶಾಲಾ ಕಾಲೇಜುಗಳಿಗೆ ದೇವಸ್ಥಾನಗಳಿಗೆ ಮತ್ತು ದಿನನಿತ್ಯ ರಸ್ತೆಯ ಬದಿಯಲ್ಲಿ ಸ್ವಚತೆಯನ್ನು ಕಾಣುವ ಉದ್ದೇಶದಿಂದ ರಸ್ತೆಯ ಬದಿಯಲ್ಲಿ ಇರುವ ಅಂಗಡಿ ವ್ಯಾಪಾರಸ್ಥರಿಗೆ ಕಸದ ಬುಟ್ಟಿಗಳನ್ನು ನೀಡಲಾಯಿತು…
ಈ ಕಾರ್ಯಕ್ರಮದಲ್ಲಿ ಅಥಣಿ ಮಂಡಲ ಅಧ್ಯಕ್ಷರಾದ ಅಣ್ಣಾಸಾಬ ನಾಯಕ, ಯುವ ಮೋರ್ಚಾ ಅಧ್ಯಕ್ಷ ಮಹಾಂತೇಶ ಬೆಳ್ಳಕ್ಕಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ನಾಯಿಕ ಮತ್ತು ಗಣೇಶ ಪೂಜಾರಿ ಉಪಾಧ್ಯಕ್ಷರಾದ ಮಹಾಂತೇಶ ಮುಳ್ಳಟ್ಟಿ,ಪ್ರದೀಪ ಬಡಿಗೇರ, ಸುಶಾಂತ ಸಾಳ್ಳುಂಕ್ಕೆ ಕಾರ್ಯದಶಿಗಳಾದ ಅಭಯ ಸಗರೆ ಯುವ ಮೋರ್ಚಾ ಖಜಾಂಚಿ ಅನಿಲ ಮೊರೆ .ಚಿಕ್ಕೋಡಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಅನಿಲ ಭೋಸಲೆ ಮತ್ತು ಸ್ಥಳೀಯ ನಾಯಕರಾದ ಲಕ್ಷ್ಮಣ ಮುಗಳಖೋಡ, ಅಶೋಕ ಕೌಜಲಗಿ. ಸಂಗಪ್ಪ ಧರಿಗೌಡ್.ಪ್ರಕಾಶ ನಾಯಿಕ.ಮಾಹವೀರ ಆಚಾರಟ್ಟಿ.ದುಂಡಪ್ಪ ಗುಬ್ಬಚ್ಚಿ ಸುನೀಲ ಧರಿಗೌಡ ಅಮರ ಬಸರಿಕೊಂದಿ, ರವಿ ಮಗದುಮ,ಸಂತೋಷ ಕಕಮರಿ. ಲಕ್ಕಪ್ಪಾ ಬಸರಿಕೊಂಡಿ ಅನೇಕರು ಉಪಸ್ಥಿತರಿದ್ದರು