ಸಂಸದರ ಕಾರು, ಬಿಎಂಟಿಸಿ ಬಸ್​ಗೆ ದಂಡ ವಿಧಿಸಿದ ಪೊಲೀಸ್​!

0

ಕಾನೂನು ಎಲ್ಲರಿಗೂ ಒಂದೇ. ಬಡವ-ಶ್ರೀಮಂತ, ಸರ್ಕಾರಿ-ಖಾಸಗಿ ಎಂಬ ತಾರತಮ್ಯ ಇಲ್ಲ. ರಸ್ತೆ ಸಂಚಾರ ನಿಯಮಯದಲ್ಲೂ ಅಷ್ಟೆ. ಯಾರೇ ನಿಯಮ ಉಲ್ಲಂಘಿಸಿದ್ದರೂ ದಂಡ ತೆರಬೇಕು ಎಂಬುದಕ್ಕೆ ತಾಜಾ ಉದಾಹರಣೆ ಈ ಪ್ರಕರಣ.

ಹೌದು, ಸಂಚಾರ ನಿಯಮ ಉಲ್ಲಂಘಿಸಿಕೊಂಡು ಬರುತ್ತಿದ್ದ ಬಿಎಂಟಿಸಿ ಬಸ್​ ಡ್ರೈವರ್​ಗೆ ಕೆ.ಆರ್. ಪುರಂ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ಸಂಸದರೊಬ್ಬರ ಕಾರಿಗೂ ಪೊಲೀಸರು ದಂಡ ಹಾಕಿದ್ದಾರೆ.

41ನೇ ಡಿಪೋದ ಬಿಎಂಟಿಸಿ ಬಸ್ ಚಾಲಕ ನಾಗರಾಜ್ ದಂಡ ಕಟ್ಟಿದ್ದಾರೆ. ಹೂಡಿ ಮುಖ್ಯರಸ್ತೆ ಕಡೆಯಿಂದ ಕೆಆರ್ ಪುರಂ ಕಡೆಗೆ ಹೊರಟಿದ್ದ ನಾಗರಾಜ್​, ಒನ್​ ವೇ ಮಾರ್ಗದಲ್ಲಿ ಬಸ್ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಕೂಡಲೇ ಬಸ್​ಅನ್ನು ತಡೆದ ಕೆ.ಆರ್.ಪುರಂ ಟ್ರಾಫಿಕ್​ ಪೊಲೀಸ್ ಇನ್​ಸ್ಪೆಕ್ಟರ್ ಎಂ.ಎ. ಮಹಮದ್ ​ಅವರು ಚಾಲಕನಿಗೆ ದಂಡದ ಬಿಸಿ ಮುಟ್ಟಿಸಿದರು.

ಇದೇ ರಸ್ತೆಯಲ್ಲಿ ಬಂದ ಆಂಧ್ರದ ಗುಂಟೂರಿನ ಸಂಸದರಿಗೆ ಸೇರಿದ ಜಾಗ್ವಾರ್ ಕಾರಿಗೂ ದಂಡ ಹಾಕಲಾಗಿದೆ. ಸದರಿ ಕಾರನ್ನು ಸ್ಥಳೀಯ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ ಚರಣ್ ಚಾಲನೆ ಮಾಡುತ್ತಿದ್ದರು. ಅವರಿಂದ ದಂಡ ವಸೂಲಿ ಮಾಡಲಾಗಿದೆ.

LEAVE A REPLY

Please enter your comment!
Please enter your name here