ಸುದ್ದಗುಂಟೆಪಾಳ್ಯ ಪೊಲೀಸರು ಮಾದಕವಸ್ತುಗಳ ಕಿಂಗ್ಪಿನ್ ಎಂದೇ ಕರೆಯಲಾಗುವ ಆಶ್ಯಿಶ್ ಆಯಿಲ್ ಮಾರಾಟಮಾಡುತ್ತಿದ್ದ ಆಂದ್ರಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುರಕತ್ತಿ ಪ್ರಭಾಕರ್ ಮತ್ತು ಕೊರಳ ಕಾಮರಾಜ್ ಬಂಧಿತ ಆರೋಪಿಗಳು.
ನಗರದಲ್ಲಿ ಇಂದು ನಡೆದ ಸುದ್ಧಿಘೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್ ಮುರುಗನ್ ಈ ಕುರಿತು ಮಾಹಿತಿನೀಡಿದ್ದಾರೆ. ಮಾದಕವಸ್ತುಗಳ ಗಳ ಕಿಂಗ್ ಪಿನ್ ಎಂದೇ ಕರೆಸಿಕೊಳ್ಳುವುದು ಆಯಶಿಶ್ ಆಯಿಲ್, ವಿಶಾಖಪಟ್ಟಣದಲ್ಲಿ ತಯಾರಾಗುವ ಈ ಮಾದಕದ್ರವ್ಯಕ್ಕೆ ರಾಜಧಾನಿಯಲ್ಲಿ ಬಹುಬೇಡಿಕೆ ಇದೆ. ಇದನ್ನೇ ಬಂಡವಾಳವಾಗಿಸಿಕೊಂಡ ಮಾದಕ ಜಾಲ ಬೆಂಗಳೂರಿನಲ್ಲಿ ಸೃಷ್ಠಿಯಾಗಿದೆ. ಐಟಿ-ಬಿಟಿ ಉದ್ಯೋಗಿಗಳನ್ನೇ ಗುರಿಯಾಗಿಸಿಕೊಂಡ ಈ ಜಾಲ ಸದ್ದಿಲ್ಲದೆ ಬಸ್ನಲ್ಲೂ ಸರಬರಾಜು,ಮಾಡಲು ಆರಂಭಿಸಿತ್ತು. ಖಚಿತ ಮಾಹಿತಿಯ ಮೇರೆಗೆ ಸುದ್ದುಗುಂಟೆಪಾಳ್ಯ ಪೊಲೀಸರು ಇಂಥಜಾಲವೊಂದನ್ನು ಭೇದಿಸಿದ್ದಾರೆ.
ಯುವಕ-ಯುವತಿಯರು, ಐಟಿ ಬಿಟಿ ಉದ್ಯೋಗಿಗಳನ್ನು ಗುರಿಯಾಗಿಟ್ಟು ಕೊಂಡಿದ್ದ ಆರೋಪಿಗಳು ಬೈಕ್ಗಳಲ್ಲಿ ಬಂದು ನಗರದ ಪತ್ರಿಷ್ಠಿತ ಕಾಲೇಜು, ಐಟಿಬಿಟಿ ಕಂಪನಿಗಳ ಬಳಿ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅವರಿಂದ 950 ಗ್ರಾಂ ಆಯಿಲ್, 3 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಎಂದಿದ್ದಾರೆ.