ಬೆಳಗಾವಿ ಜಿಲ್ಲೆ ಅಥಣಿ ತಾಲೂಕು
ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶಾರದಾದೇವಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಿಶೇಷ ನಾಗ ಪಂಚಮಿ ಆಚರಿಸಲಾಯಿತು. ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕರವರು ಮಾತನಾಡುತ್ತ ನಮ್ಮ ದೇಶದಲ್ಲಿ ಎಷ್ಟೋ ಮಕ್ಕಳು ಅಪೌಷ್ಟಿಕತೆ ಯಿಂದ ಬಳಲುತ್ತಿದ್ದಾರೆ, ಕಲ್ಲು ನಾಗನಿಗೆ ಹಾಲೆರೆದು ವ್ಯರ್ಥಗೊಳಿಸುವ ಬದಲು ಅನಾಥ ಮಕ್ಕಳಿಗೆ ಹಾಲು ಕುಡಿಸಿ ಎಂದು ಜಾಗೃತಿ ಮೂಡಿಸಿದರು.ಮಕ್ಕಳಿಗೆ ಎಳ್ಳು ಉಂಡಿ ನೀಡುವ ಮೂಲಕ ನಾಗ ಪಂಚಮಿ ಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶಾಂತಾ ಶಿಂಧೆ ,ನಾನಾಸಾಬ ಶಿಂಧೆ,ಪ್ರೇಮಗೌಡ ನಾಯಿಕ ಉಪಸ್ಥಿತರಿದ್ದರು .
ವರದಿ: ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ