ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮರಾಪುರ ಗ್ರಾಮದ ಬಸವರಾಜು ಹನುಮಂತ ಶಿರಕೊಳ ಎಂಬ ಬಡ ಅಂಗವಿಕಲ ಕುಟುಂಬದ ಪರಿಸ್ಥಿತಿ ತುಂಬಾನೇ ತೊಂದರೆಗೆ ಸಿಲುಕಿದೆ. ಮೊದಲೇ ತನ್ನ ತಂದೆ ಹನುಮಂತ ಹಾಗೂ ಅಂಗವಿಕಲರಾದ ಬಸವರಾಜು ಶಿರಕೊಳ ಇವರಿಬ್ಬರೇ ವಾಸವಾಗಿರುವ ಈ ಕುಟುಂಬಕ್ಕೆ 8 ದಿವಸಗಳ ಹಿಂದೆ ಜೋರಾಗಿ ಸುರಿದ ಮಳೆಯಿಂದ ಇಡೀ ಸಂಪೂರ್ಣ ಮನೆಯೇ ಕುಸಿದು ಹೋಗಿದೆ. ಮೊದಲೇ ತೀವ್ರ ಬಡತನದಿಂದ ಬಳಲುತ್ತಿರುವ ಈ ಕುಟುಂಬದ ಪರಿಸ್ಥಿತಿ ತುಂಬಾನೇ ತೊಂದರೆಗೆ ಸಿಲುಕಿದ್ದು ಅಡುಗೆ ಮಾಡಲು ಸಹ ಜಾಗ ಇಲ್ಲದೇ ಸಾಕಷ್ಟು ಪ್ರತಿ ಕ್ಷಣ ಕ್ಷಣವೂ ಸಹ ಪರದಾಡುವಂತಾಗಿದೆ. ಇದರ ಜೊತೆಗೆ ಈ ಅಂಗವಿಕಲ ಕುಟುಂಬವು ಕುಸಿದ ಮನೆಯಲ್ಲೇ ವಾಸವಾಗಿದ್ದು ಈಗಲೂ ವಾಸವಾಗಿದ್ದು. ಯಾವುದೇ ಸಂದರ್ಭದಲ್ಲಿ ಅಪಾಯ ಸಂಭವಿಸಬಹುದೇನೋ ಎಂಬ ಸಂಶಯ ಕಾಡುತ್ತಿದೆ. ಆದ್ದರಿಂದ ಇಂದು ನಾವು ಭೇಟಿಕೊಟ್ಟು ಕುಟುಂಬದ ಸದ್ಯದ ಪರಿಸ್ಥಿತಿಯ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಕಿತ್ತೂರು ಜನಪ್ರತಿನಿಧಿಗಳು ಹಾಗೂ ಕಿತ್ತೂರು ತಹಶೀಲ್ದಾರ್ ರವರು ಹಾಗೂ ಎಂಕೆ ಹುಬ್ಬಳ್ಳಿ ಗ್ರಾಮ ಲೆಕ್ಕದಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬಂದೆವು. ಆದ್ದರಿಂದ ಇನ್ನಾದರೂ ಮಾನವೀಯತೆ ದೃಷ್ಟಿಯಿಂದ ಜನಪ್ರತಿನಿಧಿಗಳು, ಎಲ್ಲಾ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ಅಂಗವಿಕಲ ಕುಟುಂಬಕ್ಕೆ ಆಸರೆಯಾಗುವವರೇ ಎಂಬುದನ್ನು ಕಾದು ನೋಡಬೇಕಿದೆ.🙏🖋️ ವಂದನೆಗಳು. ಶ್ರೀ ಬಸವರಾಜು. ರಾಜ್ಯ ಉಪ ಸಂಘಟನಾ ಕಾರ್ಯದರ್ಶಿ. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್..