ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಅಂಬೇಡ್ಕರ್ ಯುವ ಸೇನೆ ಕಚೇರಿಯಲ್ಲಿ 74ನೆಯ ಸ್ವತಂತ್ರೋತ್ಸವ ದಿನಾಚರಣೆಯನ್ನು ಕರ್ನಾಟಕ ರಕ್ಷಣಾ ವೇಧಿಕೆ ಹಾಗೂ ಕರ್ನಾಟಕ ಅಂಬೇಡ್ಕರ ಯುವ ಸೇನೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ ಭಾವಚಿತ್ರ ಪೂಜೆ ಮಾಡಿದರು.ಇಂಡಿ ತಾಲೂಕಿನ ನಿವರ್ಗಿ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶಂಭುಲಿಂಗ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರವೀಣ ನಾಯಿಕ ಮಾತನಾಡಿ ಗಾಂಧೀಜಿ ಸುಭಾಷ್ ಚಂದ್ರ ಬೋಸ್ ಸಂಗೊಳ್ಳಿ ರಾಯಣ್ಣ ವೀರರಾಣಿ ಚೆನ್ನಮ್ಮ ಇನ್ನೂ ಹಲವು ಹೋರಾಟಗಾರರು ಇವರ ಸಿದ್ಧಾಂತ ಇವರ ತತ್ವ ಮನ ಭಾವನೆ ಬೆಳೆಸಿಕೊಂಡು ಹೋಗೋಣ ಎಂದು ಜನರಿಗೆ ಕರೆ ನೀಡಿದರು
ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷ ಮಹಾದೇವ ನಾಯಿಕ,ಮನಸೂರ ಅಲಿ ಶೇಖ,ಚಂದ್ರಜೀತ ಪವಾರ,ಚಂದ್ರಕಾಂತ ಕಾಂಬಳೆ ,ನಂದು ಪವಾರ ,ಎಂ ಎಂ ಪಿ ಮಾಧ್ಯಮ ಸಂಸ್ಥೆಯ ಅಧ್ಯಕ್ಷ ಮಹೇಶ ಶರ್ಮಾ ,ಅನಿಲ ಬಾಮನೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.