ಇಬ್ಬರು ಅಕ್ಕ ತಂಗಿ, ಲೋಕದ ಪರಿವೆಯಿಲ್ಲ ,ಮಾನಸಿಕ ಸ್ಥಿಮಿತವಿಲ್ಲ,ಮನೆಯ ಸುತ್ತ ಮುತ್ತ ಹಾಗೂ ಮನೆಯ ಒಳಗೆಲ್ಲಾ ಕಸದ ರಾಶಿ ತುಂಬಿಕೊಂಡು ಕೆಟ್ಟ ಅಸಹ್ಯ ವಾಸನೆ ,ಅವರಿವರು ಏನಾದರು ನೀಡಿದರೆ ಊಟ ಇಲ್ಲವಾದಲ್ಲಿ ಉಪವಾಸ ಇದು ಮೂಡುಬಿದಿರೆಯ ಕೋಟೆಬಾಗಿಲಿನಲ್ಲಿ ವಾಸವಾಗಿರುವ ಚಂದ್ರಾವತಿ ಹಾಗೂ ರಾಜೀವಿ ಇವರ ಅಸಹಾಯಕ ಸ್ಥಿತಿ
ಸ್ಪೂರ್ತಿ ವಿಶೇಷ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಹಿತೈಷಿಗಳ ನೇತ್ರತ್ವದಲ್ಲಿ ದಿನಾಂಕ 2/10/2020 ರಂದು ಬೆಳಿಗ್ಗೆ 9 ಘಂಟೆಗೆ ಗಾಂಧಿ ಜಯಂತಿಯ ದಿನದಂದು ಇವರ ಮನೆ ಹಾಗೂ ಮನೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಯುವಮಿಲನ ತಂಡ ಮೂಡುಬಿದಿರೆ ,ಬಿರುವೆರ್ ಕುಡ್ಲ ಬೆದ್ರ ಘಟಕದ ಒಂಟಿಕಟ್ಟೆ ವಲಯ ಹಾಗೂ ಶಾಲಾ ಹಿತೈಷಿಗಳ ಸಹಕಾರದೊಂದಿಗೆ ಹಮ್ಮಿಕೊಂಡಿರುತ್ತೇವೆ
ಬನ್ನಿ ಈ ಪುಣ್ಯ ಕಾರ್ಯದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ ಒಂದು ಅಸಹಾಯಕ ಕುಟುಂಬಕ್ಕೆ ನೆರವಾಗೋಣ
🙏🏻🙏🏻🙏🏻🙏🏻🙏🏻
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪ್ರಕಾಶ್ ಜೆ ಶೆಟ್ಟಿಗಾರ್
ಸಂಸ್ಥಾಪಕರು
ಸ್ಪೂರ್ತಿ ವಿಶೇಷ ಮಕ್ಕಳ ಶಾಲೆ ಮೂಡುಬಿದಿರೆ