ಉಪ್ಪಿ ಇನ್ ಕೂರ್ಗ್
ಕೊಡಗು: ಕೊರೊನಾ ಕಾರಣ ಹೇಳಿ ಹಲವು ಕಾರ್ಯ ಚಟುವಟಿಕೆ ಸ್ಥಗಿತಗೊಂಡಿರುವುದು ಸತ್ಯ,ಹೀಗೆ ಜನಸಾಮ್ಯರಾಗಲಿ ಪ್ರಭಾವಿಗಳಿಗೂ ಕಂಟಕ ಇದ್ದೇ ಇತ್ತು. ಪೀಠಿಕೆ ಬೇಡ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಕುಟುಂಬ ಸಮೇತ ಅದರಲ್ಲೂ ಏ ಸಿನಿಮಾದ ಮೊದಲೇ ಪರಿಚಯವಿದ್ದ ಜಿಗರಿ ದೋಸ್ಥ್ ಆದ ಸಂಗೀತ ನಿರ್ದೇಶಕ ಗುರುಕಿರಣ್, ಪತ್ನಿ ಪ್ರಿಯಾಂಕ ಜೊತೆಗೂಡಿ ಮಕ್ಕಳೊಂದಿಗೆ ಕೊಡಗು ಪ್ರವಾಸ ಕೈಗೊಂಡಿದ್ದಾರೆ. ಸೋಮವಾರಪೇಟೆಯ ಖಾಸಗಿ ರೆಸಾರ್ಟ್ ನಲ್ಲಿ ತಂಗಿದ್ದು ಸ್ಥಳೀಯ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿದ್ದಾರೆ. ತಾಲ್ಲೂಕಿನ ಪುಷ್ಪಗಿರಿ ತಪ್ಪಲಿನ ಶಾಂತಮಲ್ಲಿಕಾರ್ಜುನ ದೇವಾಲಯಕ್ಕೂ ಭೇಟಿ ಮಾಡಿದ ಕುಟುಂಬ ಕೊಡಗಿನ ವಾತಾವರಣ ಸವಿದಿದ್ದಾರೆ,ಮುಂದಿನ ಚಿತ್ರೀಕರಣಗಳು ಇದ್ದಲ್ಲಿ ಕೊಡಗಿನಲ್ಲಿ ನಡೆಸುವ ಉದ್ದೇಶವನ್ನು ಸ್ನೇಹಿತರಾರ ರಾಜ್ಯ ಹಾಲು ಒಕ್ಕೂಟದ ಮಾಜಿ ಎಂ.ಡಿ ಆದ ಪ್ರೇಂನಾಥ್ ಬಳಿ ಹೇಳಿದ್ದು,ಕೊರೋನಾ ಸಮಸ್ಯೆ ಬಳಿಕ ನಡೆಯುವ ಶೂಟಿಂಗ್ ಕೊಡಗಿನಲ್ಲಿ ಉಪ್ಪಿ ನಡೆಸುವ ಮಾಹಿತಿ ಲಭ್ಯವಾಗಿದೆ.