ಕಿತ್ತೂರಿನಲ್ಲಿ ರೈತ ಕ್ರಾಂತಿ ಕಹಳೆ ಮೊಳಗಿಸಿದ ನೇಗಿಲಯೋಗಿ ರೈತ ಸಂಘಟನೆ
ಬೃಹತ್ ಪ್ರತಿಭಟನೆಯ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು
ಸ್ಥಳ: ಕಿತ್ತೂರು
ವರದಿಗಾರ: ಬಸವರಾಜು
ಹೌದು ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗಳಾದ ಭೂ ಸುಧಾರಣೆ ಕಾಯ್ದೆ, apmc ತಿದ್ದುಪಡಿ ಕಾಯ್ದೆ. ವಿದ್ಯುತ್ ಖಾಸಗಿಕರಣ, ಕಾರ್ಮಿಕ ವಿರೋಧಿ ನಿಯಮಗಳನ್ನು ವಿರೋಧಿಸಿ ನೇಗಿಲಯೋಗಿ ರೈತ ಸಂಘಟನೆ ವತಿಯಿಂದ ರಾಜ್ಯ ಅದ್ಯಕ್ಶರಾದ ಧರ್ಮರಾಜು ಹಾಗೂ ಜಿಲ್ಲಾಧ್ಯಕ್ಷ ರವಿ ಪಾಟೀಲ್, ರಾಜ್ಯ , ಜಿಲ್ಲಾ, ತಾಲ್ಲೂಕು ಪದಾಧಿಕಾರಿಗಳ ನೇತೃತ್ವದಲ್ಲಿ, ಎಲ್ಲಾ ಗ್ರಾಮಗಳ ಸಮ್ಮುಖದಲ್ಲಿ ಇಂದು ಕಿತ್ತೂರು ತಾಲ್ಲೂಕಿನ ಡೊಂಬರಕೊಪ್ಪ ದಿಂದ ಚನ್ನಮ್ಮ ವೃತ್ತದವರೆಗೆ ಪಾದ ಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕಿತ್ತೂರು ತಹಶೀಲ್ದಾರ್ ರವರಿಗೆ ಮನವಿಯನ್ನು ಸಲ್ಲಿಸುವುದರ ಜೊತೆಗೆ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ರೈತರು ತಮ್ಮ ಪ್ರಶ್ನೆಗಳನ್ನು ಸುರಿಮಳೆ ಗೈದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳು ಆದ ಆನಂದ್ ಬೇವಿನ, ಸುಭಾಷ್ ಪೂಜೆರಾ, ಹುಮಾಯೂನ್ ಹುಣಸಿಕಟ್ಟಿ, ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು .🙏🖋️ ವಂದನೆಗಳು. ಶ್ರೀ ಬಸವರಾಜು.