ಕೋಲಾರ ತಹಶಿಲ್ದಾರ ಚಂದ್ರಮೌಳೇಶ್ವರ ಅವರ ಭರ್ಬರ ಹತ್ಯೆ ಖಂಡಿಸಿ ಅಥಣಿ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ 

0

ಸಾಚಿ ಟಿವಿ ನ್ಯೂಸ್

ಕೋಲಾರ ತಹಶಿಲ್ದಾರ ಚಂದ್ರಮೌಳೇಶ್ವರ ಅವರ ಭರ್ಬರ ಹತ್ಯೆ ಖಂಡಿಸಿ ಅಥಣಿ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ

ಕೋಲಾರ ತಹಶಿಲ್ದಾರ ಚಂದ್ರಮೌಳೇಶ್ವರ ಅವರ ಭರ್ಬರ ಹತ್ಯೆ ಖಂಡಿಸಿ ಅಥಣಿ ಸರ್ಕಾರಿ ನೌಕರರ ಸಂಘದಿಂದ ಅಥಣಿ ತಹಶಿಲ್ದಾರ ದುಂಡಪ್ಪಾ ಕೋಮಾರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು

ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ತಾಲೂಕು ಆಡಳಿತದ ಆರೋಗ್ಯ ಇಲಾಖೆ,ಕಂದಾಯ ಇಲಾಖೆ,ತಾಲೂಕು ಪಂಚಾಯತಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು

ಈ ವೇಳೆ ಮಾತನಾಡಿದ ಅಥಣಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಾಮಣ್ಣ ಧರಿಗೌಡರ

ಜಮೀನು ವಿವಾದದ ಸರ್ವೆ ಮಾಡಿ ಬರುವಾಗ ಕೊಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ದೊಡ್ಡಕಳವಂಚಿ ಗ್ರಾಮದಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದರು.ಈ ರೀತಿ ಪ್ರಾಮಾಣಿಕ ಸೇವೆ ಸಲ್ಲಿಸುವ ಅಧಿಕಾರಿಗಳ ಮೇಲೆ ಆಗಾಗ ಹಲ್ಲೆಗಳಾಗುತ್ತಿರುವದು ಖಂಡನೀಯ.ಆದ್ದರಿಂದ ಇನ್ನು ಮುಂದೆ ಅಧಿಕಾರಿಗಳಿಗೆ ಭದ್ರತೆ ಕೊಡುವಂತೆ ಆಗ್ರಹಿಸಿದರಲ್ಲದೆ
ಮೃತ ಚಂದ್ರಮೌಳೇಶ್ವರ ಕುಟುಂಬಕ್ಕೆ ಪರಿಹಾರ ಮನೆಯವರಿಗೆ ಕೆಲಸ ಕೊಡುವಂತೆ ಒತ್ತಾಯಿಸಿದರು.

ಸಾಚಿ ಟಿವಿ ವರದಿ:ಡಾ.ಆರ್ ಎಸ್. ದೊಡ್ಡನಿಂಗಪ್ಪಗೋಳ ಅಥಣಿ

LEAVE A REPLY

Please enter your comment!
Please enter your name here