ಸ್ಯಾಂಡಲ್ವುಡ್ನ ಹಲವು ನಟ-ನಟಿಯರು ಹಾಗೂ ನಿರ್ದೇಶಕರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ ನೀಡಿದ್ದರು. ಅಲ್ಲದೆ ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ? ಎನ್ನುವ ಮೂಲಕ ಚಿರಂಜೀವಿ ಸರ್ಜಾ ಅವರ ಸಾವಿನ ಬಗ್ಗೆಯೂ ಪ್ರಸ್ತಾಪಿಸಿದ್ದರು. ಚಿರು ಹೆಸರು ಪ್ರಸ್ತಾಪಿಸಿದ ಇಂದ್ರಜಿತ್ ವಿರುದ್ಧ ಹಲವರು ಗರಂ ಆಗಿದ್ದರು.
‘ನಾವು ಡಾ.ರಾಜ್ಕುಮಾರ್ ಪಾಲಿಸಿ ಬೆಳೆಸಿಕೊಂಡು ಬಂದವರು, ನಮ್ಮ ಕುಟುಂಬದಲ್ಲಿ ಅಂತಹ ದುರಾಭ್ಯಾಸ ಯಾರಿಗೂ ಇಲ್ಲ. ಚಿರು ಸತ್ತದ್ದು ಹೃದಯಾಘಾತದಿಂದ ಎಂದು ಸ್ವತಃ ಅವರ ಮಾವ ಸುಂದರ್ ರಾಜ್(ಮೇಘನಾ ತಂದೆ) ಸ್ಪಷ್ಟಪಡಿಸಿದ್ದರು. ‘ಸತ್ತವರ ಬಗ್ಗೆ ಹೀಗೆಲ್ಲ ಮಾತನಾಡಬಾರದು’ ಎಂದು ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಚಿರು ಬಗ್ಗೆ ಮಾತನಾಡಿದ್ದನ್ನು ವಾಪಸ್ ಪಡೆಯುತ್ತಿರುವುದಾಗಿ ಇಂದ್ರಜಿತ್ ಲಂಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಇದೀಗ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಇಂದ್ರಜಿತ್ ಲಂಕೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇವತ್ತು ಇಂದ್ರಜಿತ್ ಲಂಕೇಶ್ ಅವರು ಬಹಳ ದೊಡ್ಡ ಪ್ರಮಾಣದಲ್ಲಿ ಹೀರೋ ಆಗಲು ಹೊರಟಿದ್ದಾರೆ. ಅವರು ಫಿಲಂ ಲ್ಯಾಂಡ್ ಸುಧಾರಣೆಯಾಗಬೇಕ
ಎನ್ನುತ್ತಿದ್ದಾರೆ. ಆದರೆ. ಅವರ ಸಹೋದರಿಯೊಬ್ಬರು ಡ್ರಗ್ಸ್ ಅಡಿಟ್ ಆಗಿದ್ದರು. ಆಗ ಅವರು ಎಲ್ಲಿ ಹೋಗಿದ್ದರು? ಎಂದು ಇಂದ್ರಜಿತ್ರನ್ನು ಪ್ರಮೋದ್ ಮುತಾಲಿಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾವೇರಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಪ್ರಮೋದ್ ಮುತಾಲಿಕ್, ಡ್ರಗ್ಸ್ ಜಾಲದ ಬಗ್ಗೆ ನೀವು ಮಾಹಿತಿ ಕೊಟ್ಟಿರಬಹುದು. ಅದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಆದ್ರೆ, ದಿವಂಗತ ಚಿರಂಜೀವಿ ಸರ್ಜಾ ಅವರ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು? ಎಂದು ಇಂದ್ರಜಿತ್ ಲಂಕೇಶ್ರನ್ನು ಪ್ರಶ್ನಿಸಿದ್ದಾರೆ.
ಸರ್ಜಾ ಫ್ಯಾಮಿಲಿ ಡ್ರಗ್ಸ್ನಂತಹದ್ದೆಲ್ಲ ಮಾಡಲ್ಲ. ಅವರದ್ದೇ ಆದರ್ಶ ಇಟ್ಟುಕೊಂಡು ಫಿಲಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿದ್ದಾರೆ. ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಅವರು ಶುದ್ಧವಾಗಿದ್ದಾರೆ ಎಂದಿದ್ದಾರೆ.