ಯರ್ರಗುಂಡ್ಲಹಟ್ಟಿ ಕೂಡ್ಲಿಗಿ ತಾ ಬಳ್ಳಾರಿ ಜಿಲ್ಲೆಯ
ಜ್ಞಾನ ಯೋಗಿ ಶಿವಯೋಗಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಧೂಪಂ ಅಂಜಿನಪ್ಪ ಮಹಾ ಸ್ವಾಮಿಗಳಿಗೆ
ಮದರ್ ತೆರೆಸಾ ವಿಶ್ವ ವಿದ್ಯಾಲಯ ವತಿಯಿಂದ ಸ್ವಾಮಿಗಳ ಸೇವೆಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಇಂತಹ ಮಹಾನ್ ಗುರುಗಳ ಸೇವೆಗೆ ಸರ್ಕಾರ ಇಲ್ಲಿಯವರೆಗೆ ಯಾವುದೇ ಸಹಾಯ ಮಾಡಿಲ್ಲ ಎಂದು ಸ್ವಾಮಿಗಳ ಭಕ್ತರು , ಗ್ರಾಮಸ್ಥರು ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ಸಂಸ್ಥಾಪಕ-ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಗೌಡರಿಗೆ ಆಶ್ರಮಕ್ಕೆ ಭೇಟಿ ನೀಡಬೇಕು ಆಶ್ರಮಕ್ಕೆ ಸರ್ಕಾರದ ನೇರವು ಸಿಗುವಂತೆ ಮಾಡಬೇಕೆಂದು ಮನವಿ ಮಾಡಿದ್ದರು. ಈ ದಿನ ಸಂಸ್ಥಾಪಕ-ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಗೌಡರು , ರಾಜ್ಯ ಕಾರ್ಯದರ್ಶಿ ರಮೇಶ್ ರವರು, ಶಿವಮೊಗ್ಗ ಜಿಲ್ಲಾಧ್ಯಕ್ಷರು ಪ್ರದೀಪ್ ಮೀತ್ತಲ್ ರವರು, ಬೆಂಗಳೂರು ಜಿಲ್ಲಾಧ್ಯಕ್ಷರಾದ ಸಿ.ಎಂ. ಗಣೇಶ್ ರವರು , ಮೊಳಕಾಲ್ಮೂರು ತಾಲ್ಲೂಕ್ ಅಧ್ಯಕ್ಷರಾದ ಧನಂಜಯ್ ರವರು , ಶಿವಮೊಗ್ಗ ಜಿಲ್ಲಾ ಯುವ ಘಟಕ ಸದಸ್ಯರಾದ ದೀಪಕ್ ರವರು , ಬೆಂಗಳೂರು ಜಿಲ್ಲಾ ಸದಸ್ಯರಾದ ಲೊಕೇಶ್ ರವರು ಹಾಗೂ ಮೊಳಕಾಲ್ಮೂರು ತಾಲ್ಲೂಕು ಸದಸ್ಯರು ಆಶ್ರಮಕ್ಕೆ ಭೇಟಿ ನೀಡಿದರು.