ಡ್ರಗ್ಸ್ ಕೇಸ್ ಲಿಂಕ್ : ಕಾಂಗ್ರೆಸ್ ನ ಯುವರಾಜ್ ಗೆ ನೋಟಿಸ್ : ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ

0

ಈಗಾಗಲೇ ಹಲವರನ್ನು ಸಿಸಿಬಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟು, ವಿಚಾರಣೆಯನ್ನೂ ನಡೆಸುತ್ತಿದೆ.  ಬೆನ್ನಲ್ಲೇ ಸಿಸಿಬಿ ಪೊಲೀಸರು ಕಾಂಗ್ರೆಸ್ ನ ಸುಧಾಮಮಗರ ಮಾಜಿ ಕಾರ್ಪೊರೇಟರ್ ಹಾಗೂ ಮಾಜಿ ಶಾಸಕ ಆರ್ ಬವಿ ದೇವರಾಜ್ ಪುತ್ರ ಯುವರಾಜ್ ಗೆ ಸಿಸಿಬಿ ನೋಟಿಸ್ ನೀಡಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಡಿಕೆ ಶಿವಕುಮಾರ್ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ, ಅನುಮಾನ ಇರುವವರಿಗೆ ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆ ಮಾಡಬಹುದು ಎಂದಿದ್ದಾರೆ.

ಪೊಲೀಸರು ಸುಖಾಸುಮ್ಮನೆ ಯಾರಿಗೂ ನೋಟಿಸ್ ನೀಡಲ್ಲ, ಏನೋ ಒಂದು ಅನುಮಾನ ಇರುತ್ತದೆ.ಅದಕ್ಕೆ ನೋಟಿಸ್ ನೀಡಿರುತ್ತಾರೆ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here