ಪ್ರೀತು ವೆಲ್ಫೇರ್ ಟ್ರಸ್ಟಿನ ವತಿಯಿಂದ ಬೆಂಗಳೂರಿನ ಹೊಸಕೋಟೆಯ ಲಕ್ಷ್ಮಿಯವರು 100ಕೆಜಿ ಅಕ್ಕಿ ಯನ್ನು ದಾನ ಮಾಡಿದ್ದಾರೆ.. ಕೋವಿಡ್19 ಸಮಯದಲ್ಲಿ ಸ್ನೇಹ ಜ್ಯೋತಿ ಆಶ್ರಮದ ಎಷ್ಟೋ ಬಡ ಮಕ್ಕಳಿಗೆ ಹಸಿವು ನೀಗಿಸಿದ್ದರೆ ಅವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಡಮಕ್ಕಳ ಕಷ್ಟ ವನ್ನು ಆಲಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ..
ಈ ಸಂರ್ಧಭದಲ್ಲಿ ಭಾಗವಹಿಸಿದಂತಹ ಪ್ರೀತು ವೆಲ್ಪೇರ್ ಟ್ರಸ್ಟ್ ನ ಅಧ್ಯಕ್ಷರು ಆದಂತಹ ವರಲಕ್ಷ್ಮಿ ಅವರು ದಾನಿಗಳು ಆದಂತಹ ಹೊಸಕೋಟೆ ಲಕ್ಷ್ಮಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.. ಅವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆನಾಥ ಆಶ್ರಮ ಗಳಿಗೆ ಸಹಾಯ ಮಾಡುವ ಶಕ್ತಿಯನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು..
ಅಲ್ಲಿ ಭಾಗವಹಿಸಿದವರು ಅಧ್ಯಕ್ಷರು ಆದಂತಹ ವರಲಕ್ಷ್ಮಿ ಮಂಜುನಾಥ್ ಹಾಗೂ ಟ್ರಸ್ಟಿನ ಪದಾಧಿಕಾರಿಗಳಾದ ವಿಜಯ್ ಕುಮಾರ್, ಫಕೀರಪ್ಪ, ಇನ್ನು ಮುಂತಾದವರು ಭಾಗವಹಿಸಿದರು….
ವರದಿಗಾರ : ಪ್ರತಾಪ್. ಎ.ಬಿ