ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ 1 ನೇ ವಾರ್ಡಿಗೆ ಸಂಬಂಧ ಪಟ್ಟ ಈಗಿರುವ ಜಿಲ್ಲಾ ಪಂಚಾಯತ ಸದಸ್ಯರಾದ ಉಮಾ ಪಾಟೀಲ ವಾಸಿಸುವ ಪೂಜಾರಿ ಓಣಿಯಲ್ಲಿ ಕೊಳಚೆ ಪ್ರದೇಶ ವಾಗಿದೆ.ಕೊರೊನ ರೋಗ ಇರುವದರಿಂದ ಸರಕಾರ ಸ್ವಚ್ಛತೆಗಾಗಿ ನಿಗಾವಹಿಸಲು ಆದೇಶ ಮಾಡಿದರು ಆದೇಶವನ್ನು ಗಾಳಿಗೆ ತೂರಿದ್ದಾರೆ.
ಜಿಲ್ಲಾ ಪಂಚಾಯತ ಸದಸ್ಯರೆ ತಮ್ಮ ಮನೆಗೆ ಕೊಳಚೆ ದಾಟಿ ಹೋಗುವ ಪರಿಸ್ಥಿತಿ ಇದ್ದರು ರಸ್ತೆ ಮಾಡಿ ಸ್ವಚ್ಛತೆ ಮಾಡದಿರುವದು ನಾಚಿಗೇಡಿತನ ಸಂಗತಿ ಇನ್ನುಳಿದ ಪ್ರದೇಶ ಅಭಿವೃದ್ಧಿ ಮಾಡುವದು ಕನಸಿನ ಮಾತು ಎಂದು ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ ಆರೊಪಿಸಿದ್ದಾರೆ.
ಇಲ್ಲಿ ಜನರಿಗೆ ತಿರಿಗಾಡಲು ಆಗುತ್ತಿಲ್ಲ ವಯಸ್ಕರು ಜನ ಜಾರಿ ಬಿದ್ದು ಅವಘಡಕ್ಕೆ ತುತ್ತಾಗಿದ್ದರು ಗ್ರಾಮ ಪಂಚಾಯತ ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ ಅಭಿವೃದ್ಧಿಗೆ ಗಮನ ಹರಿಸದೆ ಇರುವದು ವಿಪರ್ಯಾಸದ ಸಂಗತಿ
ಕಾಗವಾಡ ಮತಕ್ಷೇತ್ರದ ಶಾಸಕರಾದ ಶ್ರೀಮಂತ ಪಾಟೀಲ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಅಭಿವೃದ್ಧಿಗೆ ಗಮನ ಹರಿಸಬೇಕೆಂದು ಜನರು ಒತ್ತಾಯಿಸಿದ್ದಾರೆ .