ಮತಕ್ಷೇತ್ರದಲ್ಲಿ ಬರುವ ಉಗಾರ ಬಿ ಕೆ, ಉಗಾರ ಕೆ ಎಚ್ ನೂತನ ಶಾಲಾ ಕೊಠಡಿಗಳ ಸಚಿವರ ಅನುಪಸ್ಥಿತಿಯಲ್ಲಿ ಶಾಲಾ ಕೊಠಡಿಗಳ ಗುದ್ದಲಿ ಪೂಜೆಯನ್ನು ಗ್ರಾಮದ ಮುಖಂಡರಾದ ಶೀತಲ ಪಾಟೀಲ ಅವರು ನೆರವೇರಿಸಿದರು.

0

ಕಾಗವಾಡ:-ಮತಕ್ಷೇತ್ರದಲ್ಲಿ ಬರುವ ಉಗಾರ ಬಿ ಕೆ, ಉಗಾರ ಕೆ ಎಚ್ ನೂತನ ಶಾಲಾ ಕೊಠಡಿಗಳ ಸಚಿವರ ಅನುಪಸ್ಥಿತಿಯಲ್ಲಿ ಶಾಲಾ ಕೊಠಡಿಗಳ ಗುದ್ದಲಿ ಪೂಜೆಯನ್ನು ಗ್ರಾಮದ ಮುಖಂಡರಾದ ಶೀತಲ ಪಾಟೀಲ ಅವರು ನೆರವೇರಿಸಿದರು.
ಉಗಾರ ಬಿಕೆ ಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಶೀತಲ ಪಾಟೀಲ ಅವರು ಮಾತನಾಡಿ ಶಾಸಕರು ಹಾಗೂ ಸಚಿವರಾದ ಶ್ರೀಮಂತ ಪಾಟೀಲ ಅವರ ಸತತ ಪ್ರಯತ್ನ ದಿಂದ ಉಗಾರ ಬಿ ಕೆ ದಲ್ಲಿ 7 ಕೋಣೆಗಳು ,, ಉಗಾರ ಖುರ್ದದಲ್ಲಿ 17 ಶಾಲೆಗಳ ಮುಂಜೂರಾತಿ ಮಾಡಿದ ಸಚಿವರು ಇಷ್ಟು ದೊಡ್ಡ ಪ್ರಮಾಣದಲ್ಲಿ ಎಲ್ಲ ಸರ್ಕಾರಿ ಶಾಲೆಗಳ ಕಟ್ಟಡಗಳು ಸೋರುತ್ತಿದು ದುರಸ್ಥಿ ಆಗದೆ ಇರುವುದು ಕಂಡು ಸಚಿವರಿಗೆ ಹೇಳಿದಾಗ 2ಕೋಟಿ 70 ಲಕ್ಷ ರೂ ಅನುದಾನವನ್ನು ಮಂಜೂರು ಮಾಡಿದಾರೆ ಅಲ್ಲದೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ ಅಲ್ಲದೇ 1ವರ್ಷದ ಅವಧಿಯಲ್ಲಿ 60 ರಿಂದ 70 ಕೋಟಿ ರೂ ಸಮುದಾಯ ಭವನ, ಸವಳು ಜವಳು ,ರಸ್ತೆ ಹೀಗೆ ಸಾಕಷ್ಟು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ ಎಷ್ಟೂ ವರ್ಷಗಳಿಂದ ಆಗಬೇಕಾದ ಕೆಲಸಗಳು ಅವರ ಸತತ ಪ್ರಯತ್ನದಿಂದ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ತಾ ಪಂ ಸದಸ್ಯರಾದ ವಸಂತ ಖೋತ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಆರ್ ಮುಂಜೆ, ಸಚಿವರ ಆಪ್ತಕಾರ್ಯದರ್ಶಿಯಾದ ವಿನಾಯಕ ಶಿಂಧೆ,ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಜೆ ಎ ಹಿರೇಮಠ, ಆರ್ ಪಿ ಅವತಾಡೆ, ಗ್ರಾಮದ ಮುಖಂಡರು ಹಾಗೂ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ರು, ಶಿಕ್ಷಕರು, ಹಾಗೂ ಗ್ರಾಮದ ಗ್ರಾಮಸ್ಥರು ಇದ್ದರು

 

LEAVE A REPLY

Please enter your comment!
Please enter your name here