ವರದಿ ಕೆ ಆರ್ ಪೇಟೆ
ಮರಳಿ ಮತ್ತೆ ಗೂಡಿಗೆ ಎಂಬಂತೆ ಟಿಎಪಿಸಿಎಂಎಸ್ ಚುನಾವಣೆ ಕಸರತ್ತಿನಲ್ಲಿ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಅಲಂಬಡಿ ಕವಲ್ ಸಂಜೀವಪ್ಪನವರು
ಬಳಿಕ ಮಾತನಾಡಿದ ಸಂಜೀವಪ್ಪನವರು ನನ್ನ ರಾಜಕೀಯ ಹುಟ್ಟು ಜೆಡಿಎಸ್ ಪಕ್ಷದಿಂದಲೇ, ನಾನು ಮೊದಲ ಬಾರಿಗೆ 1994ರಲ್ಲಿ ತಾಲೋಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಮಾಡಿದ್ದೇನೆ.
ಈ ಪಕ್ಷದಲ್ಲಿ ನಾನು 20ವರ್ಷ ಸೇವೆ ಮಾಡಿದ್ದೇನೆ ಕಾರಣಾಂತರಗಳಿಂದ ನಾನು ಕಾಂಗ್ರೆಸ್ ಸೇರ್ಪಡೆಯಾಗಿ ಸೇವೆ ಮಾಡಿದ್ದೇನೆ ನಾನು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿಲ್ಲ ನಾನು ಈ ಪಕ್ಷಕ್ಕೂ ಕೂಡ ದ್ರೋಹ ಮಾಡುವುದಿಲ್ಲ ನನ್ನ ಜೀವಿತಾ ಅವಧಿ ಇರುವ ತನಕ ನಾನು ಈ ಪಕ್ಷವನ್ನು ಬಿಡುವುದಿಲ್ಲ ಪ್ರಾಮಾಣಿಕವಾಗಿ ಈ ಪಕ್ಷದ ನಾಯಕರುಗಳು ಏನೇ ಆದೇಶವನ್ನು ಕೊಟ್ಟರು ನಾನು ಅದನ್ನು ಪಾಲನೆ ಮಾಡಿಕೊಂಡು ಹೋಗುತ್ತೇನೆ ಎಂದು ಪಕ್ಷದ ಎಲ್ಲ ನಾಯಕರಿಗೂ ಭರವಸೆಯನ್ನು ಕೊಟ್ಟರು…
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಮುಖಂಡರಾದ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡರು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಮ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎಲ್.ದೇವರಾಜು, ಹೆಚ್.ಟಿ.ಮಂಜು,ಐನೋರಹಳ್ಳಿ ಮಲ್ಲೇಸ್. ಸೋಮನಹಳ್ಳಿ ಭೋಜರಾಜ್, ಮುಖಂಡರಾದ ಅಕ್ಕಿಹೆಬ್ಬಾಳು ಎ.ಆರ್.ರಘು, ಮಾಡಿ ಮನೆ ಮಂಜುನಾಥ್ ಆನೆಗೊಳ. ಎಂ.ಬಿ.ಹರೀಶ್, ತಾಲ್ಲೂಕು ಪಂಚಾಯಿತಿ ಸದಸ್ಯರು, ಪುರಸಭೆ ಸದಸ್ಯರು ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದರು…..
ವರದಿಗಾರ ::::::: ಪ್ರತಾಪ್. ಎ.ಬಿ