35 ವರ್ಷದ ಶಾಸಕನ ಜೊತೆ 19 ವರ್ಷದ ಯುವತಿಯ ವಿವಾಹಕ್ಕೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ತನ್ನ ಮಗಳನ್ನು ಅಪಹರಿಸಿ ಆಗಿರುವ ಮದುವೆ ರದ್ದುಪಡಿಸುವಂತೆ ತಂದೆ ಮಾಡಿದ ಅರ್ಜಿಯನ್ನು ವಜಾಗೊಳಿಸಿದೆ.
ಎಐಎಡಿಎಂಕೆ ಶಾಸಕ ಪ್ರಭು ಮತ್ತು ಬ್ರಾಹ್ಮಣ ಸಮುದಾಯದ ಯುವತಿ ಸೌಂದರ್ಯ ಕಳೆದ ವಾರ ಕುಟುಂಬದ ವಿರೋಧದ ನಡುವೆ ವಿವಾಹ ಆಗಿದ್ದರು. ಮಗಳನ್ನು ಬ್ಲಾಕ್ ಮೇಲೆ ಮಾಡಿ ಕಿಡ್ನಾಪ್ ಮಾಡಿ ಮದುವೆ ಮಾಡಲಾಗಿದೆ ಎಂದು ತಂದೆ ಕೋರ್ಟ್ ಮೆಟ್ಟಿಲೇರಿದ್ದರಿಂದ ಪ್ರಕರಣ ವಿವಾದಕ್ಕೆ ತಿರುಗಿತ್ತು.
ವಿಚಾರಣೆ ವೇಳೆ ಸೌಂದರ್ಯ ನಾನು ಪತಿಯ ಜೊತೆ ಹೋಗುವುದಾಗಿ ತಿಳಿಸಿದ್ದು, ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಳು. ಆದರೆ ತಂದೆ ಇದು ನಂಬಿಕೆ ದ್ರೋಹವಾಗಿದ್ದು, ಮಗಳನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಶಾಸಕ ಪ್ರಭು ಹಲವು ದಶಕಗಳಿಂದ ನಮ್ಮ ಕುಟುಂಬದ ಆತ್ಮೀಯರಾಗಿದ್ದು, ಮನೆಗೆ ಬಂದಾಗಲೆಲ್ಲಾ ಆತ್ಮೀಯವಾಗಿ ಸ್ವಾಗತಿಸಲಾಗುತ್ತಿತ್ತು. ಆದರೆ ಮದುವೆ ವಿಷಯ ತಿಳಿಯುತ್ತಿದ್ದಂತೆ ದ್ವೇಷ ಸಾಧಿಸಲಾಗುತ್ತಿದೆ ಎಂದು ಪುತ್ರಿ ಸೌಂದರ್ಯ ತಂದೆಯ ವಿರುದ್ಧ ಹೇಳಿಕೆ ನೀಡಿದ್ದಳು.