ಶಿಕ್ಷಕರ ದಿನಾಚರಣೆಯಂದು ಅಪ್ಪ-ಅಮ್ಮ, ಅಂಬರೀಷ್​ ಅವರನ್ನು ನೆನಪಿಸಿಕೊಂಡ ನಟ ದರ್ಶನ್​

0

ಇಂದು ಶಿಕ್ಷಕರ ದಿನಾಚರಣೆ. ಅದೆಷ್ಟೋ ಜನರು ತಮ್ಮ ಗುರುವೃಂದವನ್ನು ನೆನಪಿಸಿಕೊಂಡು, ವಂದನೆ ಸಲ್ಲಿಸುತ್ತಿದ್ದಾರೆ. ಅದಕ್ಕೆ ಸೆಲೆಬ್ರಿಟಿಗಳೂ ಹೊರತಲ್ಲ.

ಹಾಗೇ ಖ್ಯಾತ ನಟ ದರ್ಶನ್​ ತೂಗುದೀಪ್​ ಅವರು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಟ್ವಿಟರ್​​ನಲ್ಲಿ ತಮ್ಮ ತಂದೆ-ತಾಯಿಯಾದ ತೂಗುದೀಪ್​ ಶ್ರೀನಿವಾಸ್​-ಮೀನಾ ತೂಗುದೀಪ್​ ಮತ್ತು ರೆಬಲ್​ಸ್ಟಾರ್ ಅಂಬರೀಷ್​-ಸುಮಲತಾ ಅವರ ಫೋಟೋಗಳನ್ನು ಕೊಲ್ಯಾಜ್​ ಮಾಡಿ ಪೋಸ್ಟ್​ ಮಾಡಿ, ಹುಟ್ಟಿನಿಂದ ಸಾಯುವವರೆಗೂ ಸರಿಯಾದ ಮಾರ್ಗದರ್ಶನ ನೀಡಿ, ನಮ್ಮನ್ನು ಗುರಿಯತ್ತ ಕೊಂಡೊಯ್ಯಲು ಶ್ರಮಿಸುವ ಶಿಕ್ಷಕರಿಗೆ, ಗುರುಹಿರಿಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದು ಬರೆದಿದ್ದಾರೆ.

ತಂದೆ-ತಾಯಿಯನ್ನು ಕಳೆದುಕೊಂಡಿರುವ ದರ್ಶನ್​ ಸುಮಲತಾ-ಅಂಬರೀಷ್​ ಕುಟುಂಬಕ್ಕೆ ತುಂಬ ಆಪ್ತರು. ಅಂಬರೀಷ್​ ಅವರ ಮಾರ್ಗದರ್ಶನದಲ್ಲೇ ಬೆಳೆದವರು. ಸುಮಲತಾ ಅವರನ್ನು ಮದರ್​ ಇಂಡಿಯಾ ಎಂದೇ ಕರೆಯುತ್ತಾರೆ . ಇದೀಗ ಶಿಕ್ಷಕರ ದಿನಾಚರಣೆಯಂದು ತನ್ನ ಅಪ್ಪ-ಅಮ್ಮನ ಫೋಟೋ ಜತೆ, ಸುಮಲತಾ-ಅಂಬರೀಷ್​ ಫೋಟೋವನ್ನೂ ಹಾಕಿದ್ದಾರೆ. ಈ ಮೂಲಕ ಅವರಿಗೂ ಗುರುವಿನ ಸ್ಥಾನ ನೀಡಿದ್ದಾರೆ.

LEAVE A REPLY

Please enter your comment!
Please enter your name here