ಸಂಕಷ್ಟದಲ್ಲಿ ಪಿ.ಸಿಗಳು; ಸಾಲ ಮಾಡಿ ಖರೀದಿಸಿದ್ದ ಬೈಕ್ ಸುಟ್ಟು ಕರಕಲು

0

ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪ್ರಕರಣದಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ಗಳು ಸಂಕಷ್ಟಕ್ಕೀಡಾಗಿದ್ದು, ಸಹಾಯಮಾಡುವಂತೆ ಹಿರಿಯ ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಅಂದು ಘಟನೆಯಿಂದ ಪೊಲೀಸ್​ ಕಾನ್ಸ್​ಟೇಬಲ್​ಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರು ಸಾಲ ಮಾಡಿ ಖರೀದಿಸಿದ್ದ ಬೈಕ್​ಗಳು ಸುಟ್ಟು ಕರಕಲಾಗಿದ್ದು, ಈಗ ಪ್ರತಿದಿನ ಠಾಣೆಗೆ ಬರಲು ಬೇರೆಯವರನ್ನ ಅವಲಂಬಿಸುವಂತಾಗಿದೆ. ಇನ್ನೊಂದು ಕಡೆ ಬೈಕ್​​​ಗಳ ಇನ್ಶೂರೆನ್ಸ್​ ಕೂಡಾ ಸಿಗ್ತಿಲ್ಲ. ಆಕಸ್ಮಿಕವಾಗಿ ಬೆಂಕಿ ತಗುಲಿದ್ರೆ ಮಾತ್ರ ಇನ್ಶೂರೆನ್ಸ್ ಸಿಗುತ್ತೆ. ಆದರೆ ಕಂಪನಿಯವರು, ಯಾರೋ ಬೆಂಕಿ ಇಟ್ಟಿರೋದಕ್ಕೆ ವಿಮೆ ಪರಿಹಾರ ನೀಡಲು ಆಗಲ್ಲ ಅಂತಿದ್ದಾರೆ.

ಈಗ ಹೊಸ ಬೈಕ್ ಖರೀದಿಗೆ ಒಂದೇ ಸಲ ಹಣ ಹೊಂದಿಸಲು ಪಿ.ಸಿಗಳು ಪರದಾಡುತ್ತಿದ್ದಾರೆ. ಗಲಭೆಕೋರರಿಂದ ಹಣ ವಸೂಲಿ ಮಾಡಲು ಸಾಕಷ್ಟು ಸಮಯ ತಗುಲಲಿದೆ. ಹೀಗಾಗಿ ಪಿಸಿಗಳು ಕಂಗಾಲಾಗಿದ್ದಾರೆ. ಡಿ.ಜೆ ಹಳ್ಳಿ ಪೊಲೀಸ್​ ಠಾಣೆಯಲ್ಲಿ ಬರೋಬ್ಬರಿ 67 ವಾಹನಗಳು ಸುಟ್ಟು ಹೋಗಿದ್ದು, ಸಹಾಯಕ್ಕಾಗಿ ಪಿ.ಸಿಗಳು ಹಿರಿಯ ಅಧಿಕಾರಿಗಳನ್ನ ಕೋರಿದ್ದಾರೆ.

LEAVE A REPLY

Please enter your comment!
Please enter your name here