ಬಾರವಾಡ
ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಡಿಪಾಯ!
ಭಾರತವನ್ನು ಸರ್ವೋತ್ಕೃಷ್ಟಗೊಳಿಸುವ ನಿಟ್ಟಿನಲ್ಲಿ ಪಣ ತೊಟ್ಟ ನಾವು, ಇಲ್ಲಿನ ಪ್ರತಿ ಗ್ರಾಮವನ್ನೂ ಉನ್ನತ ಮಟ್ಟಕ್ಕೆ ಬೆಳೆಸಬೇಕು. ಯಾವ ನಗರಗಳಿಗೂ ಕಡಿಮೆ ಇಲ್ಲದಂತೆ ಸರ್ವ ಸೌಲಭ್ಯಗಳನ್ನು ಕಲ್ಪಿಸಬೇಕು. ಈ ಮೂಲಕ ನಮ್ಮ ಪ್ರಜೆಗಳು ನೆಮ್ಮದಿಯಿಂದ ಬದುಕಬೇಕು. ಪ್ರಜೆಗಳ ಏಳ್ಗೆಯೇ ದೇಶದ ಉನ್ನತಿಗೆ ಭದ್ರ ಬುನಾದಿ.
ಈ ನಿಟ್ಟಿನಲ್ಲಿ ಇಂದು ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಾರವಾಡ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 50 ಲಕ್ಷ ರೂ. ಗಳ ಮೊತ್ತದಲ್ಲಿ ಗ್ರಾಮ ಪರಿಮಿತಿಯಲ್ಲಿ ಗ್ರಾಮದ ಎಸ್.ಸಿ ಕಾಲೊನಿಯಲ್ಲಿ ಪೆವರ್ ಬ್ಲಾಕ್/ ಸಿ.ಸಿ.ರಸ್ತೆ / ಆರ್. ಸಿ.ಸಿ.ಚರಂಡಿ ಹಾಗೂ ಗ್ರಾಮದ ಕೂಡು ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಊರಿನ ಹಿರಿಯರು, ಮುಖಂಡರು, ಮಹಿಳೆಯರು ಒಡಗೂಡಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
बारवाड
समाजाच्या सर्वांगीण विकासासाठी पाया!
भारताला महान बनविण्यासाठी कटिबद्ध होऊन आपण येथील प्रत्येक गावाच्या उन्नतीसाठी प्रयत्न केले पाहिजेत. कोणत्याही शहरांना कमी नाही असे गावांना सर्व सुविधा पुरवाव्यात. आपल्या नागरिकांनी यातून आनंदाने जगायला हवे. नागरिक हे देशाच्या उत्कर्षाचा पाया आहेत.
या दरम्यान निपाणी मतदारसंघातील बारवाड गावात पीडब्ल्यूडी विभागाकडून राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांच्या विशेष प्रयत्नातून पीडब्ल्यूडी विभागाकडून मंजूर झालेल्या सुमारे 50 लाख रुपयांचा निधीतून गाव हद्दीतील एस.सी कॉलनीमध्ये पेव्हर ब्लॉक /आर.सी.सी गटार आणि गावाला मिळणाऱ्या रस्ता डांबरीकरण कामकाजाला मान्यवरांच्या हस्ते भूमिपूजन करून, शुभारंभ करण्यात आला.