ಹಾಡು ಹಗಲೇ ಯುವಕನ ಹತ್ಯೆ ಸರಣಿ ಕೊಲೆಗಳಿಂದ ಆತಂಕದಲ್ಲಿ ಜನತೆ..

0

ನಿನ್ನೆ ಎಟಿಎಂ ದರೊಡೆ ಮಾಡಲು ವಿಫಲ ಯತ್ನ ನಡೆಸಿ ಎಟಿಎಂ ಸೆಕ್ಯುರಿಟಿ ಗಾರ್ಡ್ ಕೊಲೆ ನಡೆಸಿದ ಘಟನೆ ಮಾಸುವ ಮುನ್ನವೇ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ಮತ್ತೊಂದು ಕೊಲೆ ಹಾಡು ಹಗಲಿನಲ್ಲೆ ನಡೆದಿದೆ.

ಸಿಂದಗಿ ತಾಲ್ಲೂಕಿನ ಬೂದಿಹಾಳ ಪಿ ಎಚ್ ಗ್ರಾಮದ ಅಗಸಿಯಲ್ಲಿ ಹಾಡು ಹಗಲೇ ಯುವಕನೊರ್ವನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದು ಪರಾರಿ ಯಾಗಿದ್ದಾರೆ. 24 ವರ್ಷದ ಅನಿಲ ಶರಣಪ್ಪ ಇಂಗಳಗಿ(24). ಎಂಬ ಯುವಕ ಕೊಲೆಯಾದ ಯುವಕನಾಗಿದ್ದು ಕೊಲೆಗೆ ಹಳೆಯ ವೈಷಮ್ಯ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕೊಲೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಂದಗಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ವರದಿ: ಮಹಾಂತೇಶ ನೂಲಾನವರ, ಸಿಂದಗಿ

LEAVE A REPLY

Please enter your comment!
Please enter your name here