1} ಹಳ್ಳಿಗಳಲ್ಲಿ ಗಾಂಜಾ ಬೆಳೆಯುವದು ಕಾನೂನಿನ ಪ್ರಕಾರ ತಪ್ಪಾದರೆ ಸರಕಾರ ಸರಾಯಿ ಮಾರುವದು ಎಷ್ಟು ಸರಿ ? ಹಳ್ಳಿಯ ಮಟ್ಟಕ್ಕೆ ಸರಾಯಿ ಅಂಗಡಿ ತರಲು ಕಾರಣವೇನು ?

0

1} ಹಳ್ಳಿಗಳಲ್ಲಿ ಗಾಂಜಾ ಬೆಳೆಯುವದು ಕಾನೂನಿನ ಪ್ರಕಾರ ತಪ್ಪಾದರೆ ಸರಕಾರ ಸರಾಯಿ ಮಾರುವದು ಎಷ್ಟು ಸರಿ ? ಹಳ್ಳಿಯ ಮಟ್ಟಕ್ಕೆ ಸರಾಯಿ ಅಂಗಡಿ ತರಲು ಕಾರಣವೇನು ?

2}ಸರಾಯಿ ಮಾರದಿದ್ದರೆ ಸರಕಾರ ಮುನ್ನಡೆಸಲು ಸಾದ್ಯವಿಲ್ಲವೇ ?

3}ಡ್ರಗ್ಸದಿಂದ ಯುವ ಸಮುದಾಯ ಹಾಳಾಗುತ್ತದೆ ಎಂದು ಬಾಯಿ ಬಡಿದುಕೊಳ್ಳುವ ನೀವುಗಳು ಸರಾಯಿಯ ಬಗ್ಗೆ ಏಕೆ ಮಾತಾಡುತ್ತಿಲ್ಲ. ಸರಾಯಿ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುವ ನೀವು ಸರಾಯಿಯನ್ನು  ಏಕೆ ನಿಷೇದ ಮಾಡುತ್ತಿಲ್ಲ?

4}ಡ್ರಗ್ಸ ಮಾಪಿಯಾ ವಿಷಯದಲ್ಲಿ ಕೇವಲ ಚಲನಚಿತ್ರ ನಟ —ನಟಿಯರಷ್ಟೆ ಬಾಗಿಯಾಗಿದ್ದಾರೆಯೇ ?

5} ರಾಜಕೀಯ ನಾಯಕರ ಹೆಸರುಗಳು ಮುನ್ನೆಲೆಗೆ ಬಂದರೂ ಯಾಕೆ ಅವರನ್ನು ಇನ್ನು ವಿಚಾರಿಸುತ್ತಿಲ್ಲ ?ಇಷ್ಟಕ್ಕೆ ಮೂಗಿಸಬೇಕೆನ್ನುವ ತುಡಿತವೇ.ಮುಂದಿನ ದಿನಗಳಲ್ಲಿ ಕಾಲಚಕ್ರದ ಬಗ್ಗೆ ಅನುಮಾನವೇ ?

6} ಪೋಲಿಸ್ ಇಲಾಖೆಯವರ ಸಹಕಾರವಿಲ್ಲದೆ ಇಷ್ಟು ಪ್ರಮಾಣದಲ್ಲಿ ಡ್ರಗ್ಸ ಬೇರು ಬಿಟ್ಟಿದೆಯೇ .ಇದರಲ್ಲಿ ಪೋಲಿಸ್ ಇಲಾಖೆಯ ದೊಡ್ಡ ದೊಡ್ಡ ಅದಿಕಾರಿಗಳ ಕೈವಾಡ ಇಲ್ಲವೇ ?

7} ಡ್ರಗ್ಸ ಮಾಪಿಯಾ ಜಾಲಾಡುವುದ ಜೋತೆಗೆ ಅನದಿಕ್ರುತವಾದ ಮದ್ಯ ಮಾರಾಟ ಮಳಿಗೆಗಳನ್ನು ಸಹ ಜಾಲಾಡಿಸಿ ನೋಡೋಣ.

8}ವಿಜಯಪೂರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಶಾಸಕರಾದ ದೇವಾನಂದ ಚೌವಾಣರು ಡ್ರಗ್ಸ ಮಾಪಿಯಾ ಮಹಾರಾಷ್ಟ್ರದ ಗಡಿ ಬಾಗಗಳಲ್ಲಿ ವಿಪರೀತವಾಗಿ ನಡೆಯುತ್ತದೆ ಎಂದು ಹೇಳಿದ್ದಾರೆ ಅದರ ಬಗ್ಗೆ ಏಕೆ ಗಮನಹರಿಸುತ್ತಿಲ್ಲ ?

ಸರಕಾರ ಕೂಡಲೆ ಇವುಗಳಿಗೆ ಉತ್ತರಿಸಲೆಂದು ಮನವಿ ಮಾಡಿಕೊಳ್ಳುತ್ತೆನೆ.

ವಿಠಲ.ಆರ್.ಯಂಕಂಚಿ

ಬಮ್ಮನಜೋಗಿ.

LEAVE A REPLY

Please enter your comment!
Please enter your name here